ಲಾರಿ ತಡೆದು ದರೋಡೆ; ಸಹಾಯಕ್ಕೆ ಬಂದವನ ಮೇಲೆ ಹಲ್ಲೆ

ಚಿತ್ರದುರ್ಗ : ಹಿರಿಯೂರು ತಾಲೂಕಿನ ಹುಳಿಯಾರು ರಸ್ತೆಯ ಉಡುವಳ್ಳಿ ಸಮೀಪ ಬೆಳಗಿನ ಜಾವ ಲಾರಿಯೊಂದನ್ನು ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿ, ಚಾಲಕ ನಲ್ಲಿದ್ದ ಮೊಬೈಲ್ ಹಾಗೂ 15000 ರೂಪಾಯಿ ಕಿತ್ತುಕೊಂಡು ದರೋಡೆ ಮಾಡಿ ಹೋಗಿರುವ ಘಟನೆ ನಡೆದಿದೆ .ಲಾರಿ ಬಳ್ಳಾರಿಯಿಂದ ಮಂಗಳೂರಿಗೆ ಹೋಗುತ್ತಿತ್ತು ಎನ್ನಲಾಗಿದೆ ಅದೇ ವೇಳೆಗೆ ಬಿಜಾಪುರದಿಂದ ಮೈಸೂರಿಗೆ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನ ಚಾಲಕ ಸಂಶಯ ಬಂದು ಇಳಿದು ನೋಡಲು ಹೋದಾಗ ಆತನ ತಲೆಗೆ ದರೋಡೆಕೋರರು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಡಿವೈಎಸ್ಪಿ ರೋಷನ್ ಜಮೀರ್, ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಹಾಗೂ ಪಿಎಸ್ಐ ಪರಮೇಶ್ ಭೇಟಿನೀಡಿದ್ದರು.

Leave a Reply

Your email address will not be published.

Send this to a friend