ವಿವಿ ಸಾಗರ ಭರ್ತಿಗೆ 2 ಅಡಿ ನೀರು ಬಾಕಿ

ಚಿತ್ರದುರ್ಗ ( ಆಗಸ್ಟ್ ೨೦) : ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಒಳಹರಿವು ಮುಂದುವರಿದಿದ್ದು, ಡ್ಯಾಂ ಕೋಡಿ ಬೀಳಲು ಎರಡು ಅಡಿಗಳಷ್ಟು ನೀರು ಬಾಕಿ ಇದೆ. ಆದರೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಡಿಮೆ ಇದೆ.

ಇಂದಿನ ವರದಿಯಲ್ಲಿ 620 ಕ್ಯೂಸೆಕ್ ಒಳಹರಿವು ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 127.90 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ 125.50 ಅಡಿ ಸಂಗ್ರಹವಾಗಿ, ದಾಖಲು ನಿರ್ಮಾಣವಾಗಿತ್ತು. ಇದೀಗ ಈ ದಾಖಲೆಯನ್ನು ಸರಿಗಟ್ಟಿ ಮುನ್ನುಗ್ಗಿದೆ.

30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ವಿವಿ ಸಾಗರ ಡ್ಯಾಂ, 130 ಅಡಿಗಳಷ್ಟು ನೀರು ಸಂಗ್ರಹ ಹೊಂದಿದೆ.

1933 ರಲ್ಲಿ 130.25 ಅಡಿ ನೀರು ಸಂಗ್ರಹವಾಗಿತ್ತು.
ಈ ಬಾರಿ ಹೆಚ್ಚು ಮಳೆ ಬಂದು ಸುಮಾರು 2.10 ಅಡಿ ನೀರು ವಿವಿ ಸಾಗರಕ್ಕೆ ಹರಿದು ಬಂದರೆ ಕೊಡಿ ಬಿದ್ದು ಇತಿಹಾಸ ನಿರ್ಮಿಸಲಿದೆ.
ಕೊಡಿ ಬೀಳುವ ದೃಶ್ಯವನ್ನು ನೋಡಲು ಜನರು ಕಾತರದಿಂದ ಕಾಯುತ್ತಿದ್ದಾರೆ..

Leave a Reply

Your email address will not be published.

Send this to a friend