ಬಿಎಸ್​​ವೈ ಕುಟುಂಬ ವಿರುದ್ಧ ಭ್ರಷ್ಟಾಚಾರ ಆರೋಪ, ಸಿಎಂ ರಾಜೀನಾಮೆ ನೀಡಲಿ: ಸುರ್ಜೇವಾಲಾ

ಬೆಂಗಳೂರು: ಕಾಂಗ್ರೆಸ್​ ನಾಯಕರು, ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಅವರ ಮಗ ಹಾಗೂ ಮೊಮ್ಮಗನ  ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ನಿನ್ನೆ ನಗರಕ್ಕೆ ಆಗಮಿಸಿರೋ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ರು. ಇಂದು‌ ಒಂದು‌ ಮಹತ್ವದ ರಾಜಕೀಯ ವಿಚಾರ ಪ್ರಸ್ತಾಪಿಸುತ್ತಿದ್ದೇನೆ. ನಂತರ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇದರ ವಿವರ ಹೇಳಲಿದ್ದಾರೆ ಎಂದರು.

ಯಡಿಯೂರಪ್ಪ ಸರ್ಕಾರದಲ್ಲಿ ಭ್ರಷ್ಟಾಚಾರ ಮತ್ತೆ ಭುಗಿಲೆದ್ದಿದೆ. 666 ಕೋಟಿ ರೂಪಾಯಿಗಳ ಬಿಡಿಎ ಅಪಾರ್ಟ್​​​ಮೆಂಟ್ ನಿರ್ಮಾಣಕ್ಕಾಗಿ ಕಂಟ್ರಾಕ್ಟರ್ ಲಂಚ ನೀಡಿದ್ದಾರೆ. ಇದ್ರಲ್ಲಿ ಬಿಎಸ್​ವೈ ಪುತ್ರ ವಿಜಯೇಂದ್ರ ಅವರ ಪಾತ್ರವಿದೆ ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಸುರ್ಜೇವಾಲಾ ಆರೋಪ ಮಾಡಿದ್ರು.

Leave a Reply

Your email address will not be published.

Send this to a friend