ಹಿರಿಯೂರು : ತಾಲ್ಲೂಕಿನ ಮ್ಯಾಕ್ಲೂರಹಳ್ಳಿ ಗ್ರಾಮದ ದಿ. ಪುಟ್ಟಪ್ಪ ಮತ್ತು ರಾಜಮ್ಮ ಇವರ ಪುತ್ರ ಗ್ರಾಮಿಣ ಪ್ರತಿಭೆ ಪಿ. ಚಿತ್ತಯ್ಯ ನವರು ಪಿಎಚ್ ಡಿ ಪದವಿ ಪಡೆದಿರುತ್ತಾರೆ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಡಾ. ಚಂದ್ರಶೇಖರ್ ಇವರ ಮಾರ್ಗದರ್ಶನದಲ್ಲಿ ಸಮಾಜಶಾಸ್ತ್ರ ಮತ್ತು ಸಂಶೋಧನಾ ವಿಭಾಗದಲ್ಲಿ ಮಂಡಿಸಿದ ” ಗ್ರಾಮಿಣ ಪ್ರದೇಶದ ಪರಿಶಿಷ್ಟ ಜಾತಿಯ ಯುವಕರ ರಾಜಕೀಯ ಒಲವುಗಳು ; ಒಂದು ಸಮಾಜಶಾಸ್ತ್ರ ಅಧ್ಯಯನ ” ಎಂಬ ಪ್ರಬಂಧಕ್ಕೆ ಪಿಎಚ್ ಡಿ ಪದವಿ ಪಡೆದಿದ್ದಾರೆ. ಈ ಗ್ರಾಮಿಣ ಪ್ರತಿಭೆಗೆ ಗ್ರಾಮಸ್ಥರು, ಸ್ನೇಹಿತರು, ಹಾಗೂ ಪ್ರಾಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ.