ಸಾಂಪ್ರದಾಯಿಕ ಕೃಷಿಯಿಂದ ಸಮಾಜ ಸ್ವಸ್ಥ

ತ್ಯಾಗರ್ತಿ: ಹಣದಾಸೆಗೆ ವಾಣಿಜ್ಯ ಬೆಳೆಗಳ ಮೊರೆ ಹಾಗೂ ಅಧಿಕ ಇಳುವರಿಗಾಗಿ ಆಹಾರ ಬೆಳೆಗಳಿಗೆ ರಾಸಾಯನಿಕ ಬಳಸಿ ಸಾಂಪ್ರದಾಯಿಕ ಕೃಷಿಯಿಂದ ವಿಮುಖರಾಗಿರುವುದೇ ಸಮಾಜದ ಅನಾರೋಗ್ಯಕ್ಕೆ ಕಾರಣ ಎಂದು ಪ್ರಗತಿಪರ ಕೃಷಿಕ ರಾಧಾಕೃಷ್ಣ ಬಂದಗದ್ದೆ ಹೇಳಿದರು.

ಸಮೀಪದ ಮಂಚಾಲೆಯಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಸೋಮವಾರ ಏರ್ಪಡಿಸಿದ್ದ ತೋಟಗಾರಿಕೆ ಘಟಕದ ಕ್ಷೇತ್ರ ಪಾಠಶಾಲೆಯಲ್ಲಿ ಔಷಧೀಯ ಸಸ್ಯೋದ್ಯಾನ ರಚನೆ, ಮಾರುಕಟ್ಟೆ ಅವಕಾಶ ಹಾಗೂ ಆರೋಗ್ಯ ಪರಿಕಲ್ಪನೆ ಕುರಿತ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು.

Leave a Reply

Your email address will not be published.

Send this to a friend